ನಮಸ್ಕಾರ ಸ್ನೇಹಿತರೆ ಸರ್ಕಾರ ಅನೇಕ ಯೋಜನೆಗಳನ್ನು ರಾಜ್ಯದ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ ನಡೆಸುತ್ತಿದೆ. ಹೆಚ್ಚಿನ ಜನರು ಕೃಷಿಯನ್ನೇ ಆಧರಿಸಿದ್ದು ಅವರ ಕುಟುಂಬಗಳು ಕೂಡ ಕೃಷಿ ಆದಾಯದ ಮೇಲೆ ಅವಲಂಬಿತವಾಗಿರುವುದನ್ನು ನಾವು ನೋಡಬಹುದು ಇಂತಹ ಪರಿಸ್ಥಿತಿಯಲ್ಲಿ ದಿನದಿಂದ ದಿನಕ್ಕೆ ರೈತರ ಸ್ಥಿತಿ ಶೋಧೀಯವಾಗುತ್ತಿದ್ದು ಮಳೆಗಾಲ ಅಥವಾ ಪ್ರಾಕೃತಿಕ ವಿಕೋಪಗಳಿಂದ ರೈತರು ಆಗಾಗ ನಷ್ಟ ಅನುಭವಿಸಬೇಕಾಗಿದೆ.
ಒಂದು ಲಕ್ಷದವರೆಗಿನ ರೈತರ ಸಾಲ ಮನ್ನಾ :
ಯುಪಿ ಸರ್ಕಾರವು ಕಿಸಾನ್ ಸಾಲ ಮನ್ನಾ ಯೋಜನೆಯನ್ನು ಪ್ರಾರಂಭಿಸಿದ್ದು ಇದರಲ್ಲಿ ಒಂದು ಲಕ್ಷದವರೆಗಿನ ರೈತರ ಕೃಷಿ ಸಾಲವನ್ನು ರೂಪಿ ಸರ್ಕಾರವು ಮನ್ನ ಮಾಡುತ್ತದೆ. ರೈತರು ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಈ ಕೃಷಿ ಸಾಲ ಮನ್ನಾಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಸಾಲ ಮನ್ನಾ ಯೋಜನೆಯ ಅಡಿಯಲ್ಲಿ ನೋಂದಾಯಿಸಿದ ರೈತರ ಸಾಲವನ್ನು ಮನ್ನಾ ಮಾಡಲು ಪರಿಶೀಲನೆ ನಡೆಸಿದ ನಂತರ 2024ರಲ್ಲಿ ಕಿಸಾನ್ ಸಾಲ ಮನ್ನಾ ಯೋಜನೆಯ ಪಟ್ಟಿಯನ್ನು ಸರ್ಕಾರವು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಎಲ್ಲ ರೈತರ ಸಾಲವನ್ನು ಒಂದು ಲಕ್ಷದವರೆಗೆ ಮನ್ನಾ ಮಾಡಲಾಗುತ್ತದೆ. ಆದ್ದರಿಂದ ಆನ್ಲೈನ್ ನಲ್ಲಿ ಹೆಸರನ್ನು ಪರಿಶೀಲಿಸಬಹುದಾಗಿದೆ.
ಇದನ್ನು ಓದಿ : ರೈತರೇ ಖುದ್ದಾಗಿ ಬೆಳೆ ವಿವರ ದಾಖಲಿಸಿ : ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳಿ
ರೈತರ ಸಾಲ ಮನ್ನಾಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :
ಸರ್ಕಾರವು ರೈತರ ಸಾಲವನ್ನು ಮನ್ನಾ ಮಾಡುತ್ತಿದ್ದು ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ, ರೈತರ ನೋಂದಣಿ ಸಂಖ್ಯೆ ಬ್ಯಾಂಕ್ ಖಾತೆಯ ವಿವರಗಳು ಸಾಲಕ್ಕೆ ಸಂಬಂಧಿಸಿದ ದಾಖಲೆಗಳು ಆಧಾರ್ ಕಾರ್ಡ್ ಭೂಮಿಗೆ ಸಂಬಂಧಿಸಿದ ಮೂಲ ದಾಖಲೆಗಳು ಮೂಲ ಸಾಲ ಪ್ರಮಾಣ ಪತ್ರ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ರೈತರು ಹೊಂದಿರಬೇಕು.
ಹೀಗೆ ಯುಪಿ ಸರ್ಕಾರವು ರೈತರ ಸಾಲವನ್ನು ಮನ್ನಾ ಮಾಡಲು ನಿರ್ಧರಿಸಿದ್ದು ಸುಮಾರು ಒಂದು ಲಕ್ಷದವರೆಗೆ ಸಾಲವನ್ನು ಮನ್ನಾ ಮಾಡಲಾಗುತ್ತದೆ. ಅದರಂತೆ ಶೀಘ್ರದಲ್ಲಿಯೇ ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಯುಪಿ ಸರ್ಕಾರವು ಮಾಡುತ್ತದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವುದರ ಮೂಲಕ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿಯೂ ಕೂಡ ಈ ಯೋಜನೆ ಜಾರಿಯಾಗುತ್ತದೆಯೋ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ ಧನ್ಯವಾದಗಳು.
ಇತರೆ ವಿಷಯಗಳು :
- ಕರ್ನಾಟಕದ ಅಯೋಧ್ಯೆ ಎಂದು ಈ ಸ್ಥಳವನ್ನು ಏಕೆ ಕರೆಯುತ್ತಾರೆ..? ನಿಮಗೆ ಗೊತ್ತ..?
- ರಾಮನ ಪ್ರಾಣ ಪ್ರತಿಷ್ಠಾಪನೆಗೆ ಅಪ್ಪಣೆ ಪಡೆಯಬೇಕು ಮೋದಿ ; ಯಾರ ಅಪ್ಪಣೆ ಏಕೆ ಮುಖ್ಯವಾಗಿದೆ ನೋಡಿ?